ಪ್ರೀತಿಯನು ಹಂಚುವುದೇ ಬದುಕಾಗಿರಲಿ
ನಂಬಿಕೆಯ ಬೆಳೆಸೋ ಗೀಳು ಮನಸಿಗಿರಲಿ
ದ್ರೋಹವನೆಂದು ಖಂಡಿಸುವ ಶಕ್ತಿಯಿರಲಿ...
ಸತ್ಯಕ್ಕೆ ತಲೆಬಾಗುವ ಗುಣವಿರಲಿ
ಮಿಥ್ಯಕ್ಕೆ ವಿಷವುಣಿಸೋ ದಿಟ್ಟತನ ಬರಲಿ
ಅಹಂಕಾರವನು ಮೆಟ್ಟಿನಿಲ್ಲುವ ಒಲವು ಜೊತೆಗಿರಲಿ...
ಮನೊವೇಗದ ಜೊತೆಗೆ ಓಡುವವರಾರಿಲ್ಲ
ಮನೋಸ್ಥೈರ್ಯದ ಮುಂದೆ ಮಂಡಿಯೂರುವನು ಜವರಾಯ
ಆತ್ಮ ಸಾಕ್ಷಿಯ ಮುಂದೆ ಬೆತ್ತಲಾಗದಿರಲಿ ಬದುಕು...
ಅಸುರತೆಯು ಅಳಿಯಲಿ ಮನುಜತೆಯ ಜ್ಯೋತಿಯಲಿ
ಹೊತ್ತಿ ಉರಿಯಲಿ ಅಜ್ಞಾನದಾ ಅಂಧಕಾರ
ಪ್ರತಿ ದಿನವು ಬೆಳಗಲಿ ಜ್ಞಾನದ ದೀಪಾವಳಿ...
ಬದುಕುವಾ ಆಸೆಗೆ ಕಿಚ್ಚು ಹಚ್ಚಿದ ಮೇಲೆ
ನಡೆಯಲಿ ಅನ್ಯಾಯದ ಮಾರಣಹೋಮ
ಪ್ರತಿದಿನವೂ ನವರಾತ್ರಿ ಇಳೆಯಲ್ಲಿ ದುಷ್ಟ ದಮನಕ್ಕೆ...
ನಂಬಿಕೆಯ ಬೆಳೆಸೋ ಗೀಳು ಮನಸಿಗಿರಲಿ
ದ್ರೋಹವನೆಂದು ಖಂಡಿಸುವ ಶಕ್ತಿಯಿರಲಿ...
ಸತ್ಯಕ್ಕೆ ತಲೆಬಾಗುವ ಗುಣವಿರಲಿ
ಮಿಥ್ಯಕ್ಕೆ ವಿಷವುಣಿಸೋ ದಿಟ್ಟತನ ಬರಲಿ
ಅಹಂಕಾರವನು ಮೆಟ್ಟಿನಿಲ್ಲುವ ಒಲವು ಜೊತೆಗಿರಲಿ...
ಮನೊವೇಗದ ಜೊತೆಗೆ ಓಡುವವರಾರಿಲ್ಲ
ಮನೋಸ್ಥೈರ್ಯದ ಮುಂದೆ ಮಂಡಿಯೂರುವನು ಜವರಾಯ
ಆತ್ಮ ಸಾಕ್ಷಿಯ ಮುಂದೆ ಬೆತ್ತಲಾಗದಿರಲಿ ಬದುಕು...
ಅಸುರತೆಯು ಅಳಿಯಲಿ ಮನುಜತೆಯ ಜ್ಯೋತಿಯಲಿ
ಹೊತ್ತಿ ಉರಿಯಲಿ ಅಜ್ಞಾನದಾ ಅಂಧಕಾರ
ಪ್ರತಿ ದಿನವು ಬೆಳಗಲಿ ಜ್ಞಾನದ ದೀಪಾವಳಿ...
ಬದುಕುವಾ ಆಸೆಗೆ ಕಿಚ್ಚು ಹಚ್ಚಿದ ಮೇಲೆ
ನಡೆಯಲಿ ಅನ್ಯಾಯದ ಮಾರಣಹೋಮ
ಪ್ರತಿದಿನವೂ ನವರಾತ್ರಿ ಇಳೆಯಲ್ಲಿ ದುಷ್ಟ ದಮನಕ್ಕೆ...