ಮತ್ಸ್ಯವಾಗಬೇಕು ಜಗದೊಳು
ಜ್ಞಾನದ ಕಡಲಲಿ ಈಜಲೂ,
ಕೂರ್ಮನಾಗಬೇಕಿದೆ ಬದುಕಲಿ
ಜವಾಬ್ದಾರಿಗಳೆಂಬ ಮಂದಾರವ ಹೊರಲು...
ವರಾಹ ರೂಪಿಯಾಗಬೇಕಿದೆಯಿಲ್ಲಿ
ಮನದ ಪಾತಳದೊಳಗಿನ ಮಲಿನ ಹೊರದೂಡಲು,
ನರಸಿಂಹನಂತೆ ಕಂಬವೊಡೆದು ಹೊರಬರಬೇಕು
ಅರಿಷಡ್ವರ್ಗಗಳ ಹೆಡೆಮುರಿಯೇ...
ವಾಮನ ಈಗ ತ್ರಿವಿಕ್ರಮನಾಗಬೇಕು
ಅಹಂಕಾರವ ತುಳಿದು ನಿಲ್ಲೋಕೆ,
ಭಾರ್ಗವ ರಾಮನಂತೆ ಭೋರ್ಗರಿಸಬೇಕಿಲ್ಲಿ
ಅನ್ಯಾಯ ಅನೀತಿಗಳ ದಂಡಿಸೋಕೆ...
ದಾಶರಥಿಯಾಗಬೇಕು ಭರತ ಭೂಮಿಯಲಿ
ರಾಮ ರಾಜ್ಯವ ಕಟ್ಟಿ ಜಗವ ಸಲಹೋಕೆ,
ವಸುದೇವ ಸುತ ವಾಸುದೇವನಾಗಬೇಕಿಲ್ಲಿ
ಜಗದ್ಗುರುವಾಗಿ ಲೋಕವ ಕಾಪಾಡೋಕೆ...
ಬುದ್ಧನಾಗಿ ಬದುಕ ಜೀವಿಸಬೇಕು
ಪ್ರೀತಿ ಪ್ರೇಮದಲಿ ಜಗಕೆ ಬೆಳಕು ತೋರಬೇಕು,
ಸತ್ಯ ಧರ್ಮ ನ್ಯಾಯ ನೀತಿಗಳ ಮೆರೆಸೋಕೆ
ಅವತಾರ ಪುರುಷರಾಗಬೇಕಿದೆಯಿಲ್ಲಿ...
ಜ್ಞಾನದ ಕಡಲಲಿ ಈಜಲೂ,
ಕೂರ್ಮನಾಗಬೇಕಿದೆ ಬದುಕಲಿ
ಜವಾಬ್ದಾರಿಗಳೆಂಬ ಮಂದಾರವ ಹೊರಲು...
ವರಾಹ ರೂಪಿಯಾಗಬೇಕಿದೆಯಿಲ್ಲಿ
ಮನದ ಪಾತಳದೊಳಗಿನ ಮಲಿನ ಹೊರದೂಡಲು,
ನರಸಿಂಹನಂತೆ ಕಂಬವೊಡೆದು ಹೊರಬರಬೇಕು
ಅರಿಷಡ್ವರ್ಗಗಳ ಹೆಡೆಮುರಿಯೇ...
ವಾಮನ ಈಗ ತ್ರಿವಿಕ್ರಮನಾಗಬೇಕು
ಅಹಂಕಾರವ ತುಳಿದು ನಿಲ್ಲೋಕೆ,
ಭಾರ್ಗವ ರಾಮನಂತೆ ಭೋರ್ಗರಿಸಬೇಕಿಲ್ಲಿ
ಅನ್ಯಾಯ ಅನೀತಿಗಳ ದಂಡಿಸೋಕೆ...
ದಾಶರಥಿಯಾಗಬೇಕು ಭರತ ಭೂಮಿಯಲಿ
ರಾಮ ರಾಜ್ಯವ ಕಟ್ಟಿ ಜಗವ ಸಲಹೋಕೆ,
ವಸುದೇವ ಸುತ ವಾಸುದೇವನಾಗಬೇಕಿಲ್ಲಿ
ಜಗದ್ಗುರುವಾಗಿ ಲೋಕವ ಕಾಪಾಡೋಕೆ...
ಬುದ್ಧನಾಗಿ ಬದುಕ ಜೀವಿಸಬೇಕು
ಪ್ರೀತಿ ಪ್ರೇಮದಲಿ ಜಗಕೆ ಬೆಳಕು ತೋರಬೇಕು,
ಸತ್ಯ ಧರ್ಮ ನ್ಯಾಯ ನೀತಿಗಳ ಮೆರೆಸೋಕೆ
ಅವತಾರ ಪುರುಷರಾಗಬೇಕಿದೆಯಿಲ್ಲಿ...