ಮರೆತು ಹೋದ ಪದಗಳವು
ಮತ್ತೆ ಎದೆಯ ಸೇರಿವೆ,
ಹೊಸ ಕನಸಿನ ಹೊಸತನಕೆ
ಆಸರೆಯನು ನೀಡಿವೆ.
ಬರಿದಾದ ಭಾವವದು
ಮತ್ತೆ ತುಂಬಿ ತುಳುಕಿದೆ,
ಹೊಸ ಆಸೆಯ ಹೊಸತನವು
ಮತ್ತೆ ತಾನು ಚಿಗುರಿದೆ.
ನಾಳೆಯೇನು ಎಂಬ ಚಿಂತೆ
ಇಂದಿನಲ್ಲಿ ಕರಗಿದೆ,
ನವ ಚೈತನ್ಯದ ನಗುವಿಂದು
ತುಟಿಯ ಅಂಚಲಿ ಮಿನುಗಿದೆ.
ನಗುತಿರುವ ಮನಸೀಗ
ತನ್ನ ತಾನೇ ಮರೆತಿದೆ,
ಕನಸೊಂದ ಕಟ್ಟುವ ಹುರುಪಲಿ
ಹಾರೋ ಚಿಟ್ಟೆಯಾಗಿ ಮೆರೆದಿದೆ.
ಹೊಸ ಮನೋ ಧೈರ್ಯವನ್ನು ಪ್ರೇರೇಪಿಸುವ ನಿಮ್ಮ ಕವನ ಇಷ್ಟವಾಯಿತು.
ReplyDeletethank u sir
ReplyDelete