30 July, 2017

ಉಯ್ಯಾಲೆ...

ಉಯ್ಯಾಲೆ ಉಯ್ಯಾಲೆ
ಬದುಕಿಲ್ಲಿ ಉಯ್ಯಾಲೆ,
ವಿಧಿಯಿಲ್ಲಿ ಆಡಿಸುವ
ನೋವು ನಲಿವುಗಳ ಜೋಕಾಲಿ...

ಉಯ್ಯಾಲೆ ಉಯ್ಯಾಲೆ
ಬದುಕು ನೆನಪುಗಳ ಜೋಮಾಲೆ,
ಕಣ್ಣೀರು ಪನ್ನೀರು
ಬೆರೆತಂತ ನವ್ವಾಲೆ...

ಉಯ್ಯಾಲೆ ಉಯ್ಯಾಲೆ
ಇದು ಕನಸುಗಳ ಸುವ್ವಾಲಿ,
ಭಾವಗಳ ಬಂಧಿಸಿದ
ಬದುಕಿಲ್ಲಿ ಉಯ್ಯಾಲೆ...

ಉಯ್ಯಾಲೆ ಉಯ್ಯಾಲೆ
ಬದುಕಿಲ್ಲಿ ಉಯ್ಯಾಲೆ,
ಸಂಬಂಧಗಳ ಸುಳಿಯೊಳಗೆ
ಜೀವನದ ಜೊಕಾಲಿ...

ಉಯ್ಯಾಲೆ ಉಯ್ಯಾಲೆ
ಇದು ಕಾಲವು ತೂಗುವ ಉಯ್ಯಾಲೆ,
ಕ್ಷಣದಲ್ಲೇ ಬದಲಾಗೊ
ಕಾಲನ ಕೈಯೊಳಗನ ತೂಗುಯ್ಯಾಲೆ...






18 July, 2017

ಪ್ರೀತಿ...

ಮನಸಿನ ಭಾವ ಇದು
ಕನಸಿನ ಮಾತು ಇದು,
ಸೃಷ್ಟಿಗೆ ಜೀವ ಇದು
ಜೀವಿಯ ಮಿಡಿತ ಈ ಪ್ರೀತಿ...

ಸರಸಕೆ ಕಾರಣವೂ ಇದು
ವಿರಹದ ವಿರಾಟ ರೂಪನೂ,
ತ್ಯಾಗಕ್ಕೆ ಹೆಸರೂ ಇದು
ಸ್ವಾರ್ಥದ ಪೊರೆಯ ನೆರಳು...

ಬಾಳಿನ ಕಣ್ಣರೆಪ್ಪೆಯಿದು
ಭಾಗ್ಯದ ಬಾಗಿಲ ಬೀಗದಂತೆ,
ಅಂಧಕಾರಕ್ಕೆ ಬೆಳಕೂ ಇದು
ಮನಸ ಬೆಳಗೋ ದೀಪದಂತೆ...

ದೇಹಕ್ಕೆ ಉಸಿರಂತೆ
ಉಸಿರಿಗೂ ಹೆಸರಂತೆ,
ಆತ್ಮಕ್ಕೆ ಸಖನಂತೆ
ಬಾಳಿಗೆ ರವಿಕಿರಣ ಈ ಪ್ರೀತಿ...

ಮಮತೆಯ ಮಡಿಲು ಈ ಪ್ರೀತಿ
ಕರ್ತವ್ಯದ ಕರೆಯಂತೆ ಇದರ ರೀತಿ,
ಕೈ ಹಿಡಿದು ನಡೆಸುವಾ ಸಖನಂತೆ
ಸದಾ ಹಸಿರು ಈ ಪ್ರೀತಿ...

07 July, 2017

ನುಡಿ ನಮನ...

ತಾಯಿ ಭಾರತಿಯ ಮಗಳಿವಳು
ಈ ಕನ್ನಡತಿ,
ಮಕ್ಕಳ ಪಾಲಿಗೆ ಇವಳೆಂದೂ
ಜೈ ಭುವನೇಶ್ವರಿ...

ನಿತ್ಯ ನಿರಂತರ ಇವಳಿಗೆ ಇಲ್ಲಿ
ಅರಶಿನ ಕುಂಕುಮದ ಶೃಂಗಾರ,
ನಿತ್ಯವೂ ಪೂಜೆಯ ಪಡೆಯುತ ಇಲ್ಲಿ
ಕುಲದೇವತೆಯಾಗಿಹಳು ಶ್ರೀ ಚಾಮುಂಡಿ...

ಇವಳೆಂದೂ ಈ ಸೃಷ್ಟಿಯ ಶೃಂಗಾರ
ಇವಳ ಒಡಲಲ್ಲಿಹುದು ಜೊಗದ ವೈಯಾರ,
ಮಡಿಲಲ್ಲಿ ಬೆಳಗಿಹಳು ಶಿಲ್ಪ ಕಲೆಗಳ ಸಂಸ್ಕೃತಿಯಾ
ಮುಕುಟವಾಗಿಹವು ಇಲ್ಲಿ ಸಾಲು ಗಿರಿ ಶಿಖರ...

ದೇವಗಂಗೆ ಹರಿದಿಹಳು ಇಲ್ಲಿ ಕಾವೇರಿಯಾಗಿ
ತುಂಗೆ ಕೃಷ್ಣೆ ಮಾಡಿಹರು ಇವಳಿಗೆ ನಿತ್ಯ ಅಭಿಷೇಕ,
ತಂಪಿನ ಉಡುಗೆಯ ಹೊದಿಸಿದೆ ಮಡಿಕೇರಿಯ ಮಂಜು
ಹಸುರಿನ ಸೀರೆಯ ಶೃಂಗಾರ ಪಶ್ಚಿಮಘಟ್ಟಗಳ ಸಾಲು...

ಪಡುವಣದಿ ಜೊತೆಯಾಗಿದೆ ಕಡಲೂರಿನ ತೀರ
ಮೇಲೈಸಿವೆ ಭರತನಾಟ್ಯ ಯಕ್ಷಗಾನ ಕಲೆಗಳು ನೋಡ,
ಮಧುರ ಮಧುರವೀ ಕಲಿಗಳ ನಾಡು
ಮಧುರ ಮಧುರವೀ ಕವಿಗಳ ಬೀಡು...


02 July, 2017

ಪರಮಾತ್ಮ...

ಮೇಲೆ ಒಬ್ಬನಿರುವ
ಎಲ್ಲಾ ನೊಡುತಿರುವ,
ತಿಳಿದು ನಡೆಯೋ ಮನುಜ
ಬದುಕಿನಲ್ಲಿ ನೂಕುನುಗ್ಗಲೇತಕೋ...

ಮೂರು ದಿನದ ಸಮಯ
ಇದ್ದೇ ಇದೆ ಇಲ್ಲಿ ಎಲ್ಲರೀಗೂ,
ಅವಕಾಶ ಕೊಟ್ಟು ನೊಡುತಿರುವ
ಅವಸರವೇತಕೋ ಮುಂದೆ ಸಾಗಲು...

ಪ್ರೀತಿ ಸ್ನೇಹ,ಸಂಭಂಧವೆಲ್ಲಾ
ಅವನಾಟವಷ್ಟೇ ಇಲ್ಲಿ,
ಖುಷಿಯ ಕೊಟ್ಟು ನೋಡಿ
ಜಗವ ಮರೆಸುತಿರುವನಷ್ಟೆಯಿಲ್ಲಿ...

ಕಷ್ಟ,ನೋವುಗಳೆಲ್ಲಾ ಇಲ್ಲಿ
ಬರೀಯ ಪರೀಕ್ಷೆಯಷ್ಟೇ,
ಜಗದ ಪಯಣದೊಳಗೆ
ತನ್ನ ಇರುವ ತೋರಿಸುತಿರುವನಷ್ಟೆಯಿಲ್ಲಿ...

ಅವನಿರದ ಜಾಗವೆಲ್ಲೂ ಇಲ್ಲಾ
ಹುಡುಕಾಟವೇನೂ ಬೇಕಿಲ್ಲ,
ತೆರೆಯಬೇಕು ಮನಸ ಕದವ
ಅವನೊಲವು ಪಡೆದು ಧನ್ಯರಾಗಲು...