07 July, 2017

ನುಡಿ ನಮನ...

ತಾಯಿ ಭಾರತಿಯ ಮಗಳಿವಳು
ಈ ಕನ್ನಡತಿ,
ಮಕ್ಕಳ ಪಾಲಿಗೆ ಇವಳೆಂದೂ
ಜೈ ಭುವನೇಶ್ವರಿ...

ನಿತ್ಯ ನಿರಂತರ ಇವಳಿಗೆ ಇಲ್ಲಿ
ಅರಶಿನ ಕುಂಕುಮದ ಶೃಂಗಾರ,
ನಿತ್ಯವೂ ಪೂಜೆಯ ಪಡೆಯುತ ಇಲ್ಲಿ
ಕುಲದೇವತೆಯಾಗಿಹಳು ಶ್ರೀ ಚಾಮುಂಡಿ...

ಇವಳೆಂದೂ ಈ ಸೃಷ್ಟಿಯ ಶೃಂಗಾರ
ಇವಳ ಒಡಲಲ್ಲಿಹುದು ಜೊಗದ ವೈಯಾರ,
ಮಡಿಲಲ್ಲಿ ಬೆಳಗಿಹಳು ಶಿಲ್ಪ ಕಲೆಗಳ ಸಂಸ್ಕೃತಿಯಾ
ಮುಕುಟವಾಗಿಹವು ಇಲ್ಲಿ ಸಾಲು ಗಿರಿ ಶಿಖರ...

ದೇವಗಂಗೆ ಹರಿದಿಹಳು ಇಲ್ಲಿ ಕಾವೇರಿಯಾಗಿ
ತುಂಗೆ ಕೃಷ್ಣೆ ಮಾಡಿಹರು ಇವಳಿಗೆ ನಿತ್ಯ ಅಭಿಷೇಕ,
ತಂಪಿನ ಉಡುಗೆಯ ಹೊದಿಸಿದೆ ಮಡಿಕೇರಿಯ ಮಂಜು
ಹಸುರಿನ ಸೀರೆಯ ಶೃಂಗಾರ ಪಶ್ಚಿಮಘಟ್ಟಗಳ ಸಾಲು...

ಪಡುವಣದಿ ಜೊತೆಯಾಗಿದೆ ಕಡಲೂರಿನ ತೀರ
ಮೇಲೈಸಿವೆ ಭರತನಾಟ್ಯ ಯಕ್ಷಗಾನ ಕಲೆಗಳು ನೋಡ,
ಮಧುರ ಮಧುರವೀ ಕಲಿಗಳ ನಾಡು
ಮಧುರ ಮಧುರವೀ ಕವಿಗಳ ಬೀಡು...


No comments:

Post a Comment