ಭರವಸೆಯ ಜೋಳಿಗೆಯೊಳಗೆ
ಬದುಕು ನಗುತಿಹುದು,
ಸಂತೃಪ್ತಿಯ ಕಮಂಡಲದೊಳಗೆ
ಆಸೆ ತಣಿದಿಹುದು...
ಬಂಧನಗಳ ತ್ಯಜಿಸಲು
ಮನಸು ಲೋಕವನೇ ಆಳುವುದು,
ನಶ್ವರ ಭಾವವು ಜಗದೊಳು
ಶಾಂತಿಯ ಸಾರಿಹುದು...
ಉತ್ತರ ಕಾಣದ ಪ್ರಶ್ನೆಗಳೆಲ್ಲವೂ
ಜ್ಞಾನದ ಜ್ಯೋತಿಗೆ ಆಹುತಿಯಾಗಿ,
ಲೋಕದ ಕತ್ತಲೆಗೀಗ ಬೆಳಕಿನ
ಮಿಂಚೊಂದು ಕಂಡಿಹುದು...
ನಶ್ವರದಿಂದ ಈಶ್ವರನೆಡೆಗೆ
ಬದುಕಿನ ಪಯಣ ಈ ಲೋಕದಲಿ,
ಮಾನವನಿಲ್ಲಿ ಮಾಧವನಾಗುವ
ಪ್ರೀತಿಯ ಸಾರವ ಹಂಚುತಲಿ...