ಕಾಣದಿರುವ ಲೋಕಕೆ
ಪಯಣಿಸೋಕೆ ತವಕವೂ,
ಇರುವ ಒಂದು ಮನಸಿಗೂ
ನೂರ ಒಂದು ಬಾಗಿಲು...
ಕೋಪ ತಾನು ಉರಿಯಲು
ಮನಸು ಇಲ್ಲಿ ಯಜ್ಞಕುಂಡವೂ,
ಅನುಮಾನವಿಲ್ಲಿ ಕಾಡಲು
ಮನಸು ಮರುಭೂಮಿಯೂ...
ಅವಮಾನವನ್ನು ಸಹಿಸುತಾ
ಮನಸು ಮುಚ್ಚಿದ ಕೆಂಡವೂ,
ಸುಳ್ಳಿಗೆ ಸಾಕ್ಷಿಯಾಗುತಾ ಸಾಗುತಾ
ನಿತ್ಯವೂ ಸಾವು ಆತ್ಮಕೆ...
ಕನಸುಗಳು ಇಲ್ಲಿ ಕಾಡಲು
ಮನಸು ನೀಲ ಸಾಗರ,
ಕನಸ ನೆರಳಲ್ಲಿ ನಗಲು
ಬದುಕಿಗೆ ಚೈತನ್ಯವೂ...