ಭಕ್ತಿಯದು ಜೀವದಾ ಭಯವಲ್ಲ
ಮುಕ್ತಿಯಾ ಕಡೆಗೊಂದು ನೋಟವಂತೆ,
ಪೂಜೆಯದು ಮನಸಿನ ಆಡಂಬರವಲ್ಲ
ಬದುಕಿನ ಪಯಣಕೆ ಹರಕೆಯಷ್ಟೇ...
ಸರಿಸಿ ಚಿಂತೆಯ ಪೂರಾ ಬದುಕಲಿ
ಪಯಣ ಮುಂದೆ ಸಾಗಲು ಇಲ್ಲಿ,
ಮನಸೇ ಮಂದಿರವು ಜೀವವೇ
ಪ್ರಾರ್ಥನೆಯಷ್ಟೇ ಇಲ್ಲಿ ನೆಮ್ಮದಿಯೂ...
ದೇಹವೆಂಬ ದೇಗುಲದಲ್ಲಿ
ಆತ್ಮವೆಂಬ ಜ್ಯೋತಿಯು ಬೆಳಗುತಿರಲು,
ಸತ್ಸಂಗ ಸದ್ವಿಚಾರಗಳ ವಾಚಿಸುತಲಿ
ಪೂಜೆಯು ನಿತ್ಯವೂ ಮನಸೊಳಗೆ...
ಕರ್ಮಗಳ ಬಂಧನವ ಬಿಡಿಸಬಯಸೆ
ಮನದ ಮಂದಿರವು ಶುಚಿಯಾಗಿರಲಿ,
ನೂರು ನೋವುಗಳ ದಾಟೇ ಬದುಕು
ನಡೆಯುತಿರಲಿ ಪೂಜೆ ದೇಹವೆಂಬ ದೇಗುಲದಿ....