ಬೆನ್ನ ಹಿಂದೆ ಗುರುವು ಇರಲು
ಬದುಕಿಗಿಲ್ಲಿ ಗುರಿಯು ಇಹುದು
ಬದುಕ ದಾರಿ ದೀಪ ಜೊತೆಗೆ ಇರಲು
ಸಾಗೊ ದಾರಿಗಿಲ್ಲ ಇಲ್ಲಿ ಕತ್ತಲೆ.
ಬುದ್ಧಿ ತಿದ್ಧಿ ತೀಡುವ ಗುರುವು ಒಬ್ಬ ಕಲಾವಿದ
ಅಂಧಕಾರ ತುಂಬಿದ ಮನಸ ಕೊಳೆಯ ಕಳೆಯುವ,
ಮಣ್ಣ ಮುದ್ದೆಯನ್ನ ಮೂರ್ತಿಯಾಗಿಸೋ ಶಿಲ್ಪಿಯೂ
ಬದುಕ ಪಯಣಕೆ ದಾರಿ ತೋರುವ ಇವನು ಒಬ್ಬ ನಾವಿಕ.
ಅಹಂಕಾರದ ಕಳೆಯ ಮುರಿದು ವಿನಯವನ್ನು ಬೆಳೆಸುವ
ತಿಳುವಳಿಕೆಯ ಪಸಲು ತೆಗೆವ ಇವನು ನೇಗಿಲ ಯೋಗಿಯು,
ಜ್ಞಾನ ಜ್ಯೋತಿ ಬೆಳಗಿಸಿ ಜಗವ ತಾನು ತೋರುವ
ಇವನು ನಿತ್ಯ ಯೋಗಿಯು ಜಗದ ಕರ್ಮ ಯೋಗಿಯೂ.
ತ್ಯಾಗ ಸಹನೆ ಕಲಿಸುತ ಮನಸ ಪ್ರಬುದ್ಧಗೊಳಿಸುವ
ಪ್ರೀತಿ ಪಾಠ ಹೇಳುತ ಜಗವ ತಾನು ಮೆರೆಸುವ
ಶಾಂತಿ ಮಂತ್ರದಿಂದಲೇ ಭಾತ್ರುತ್ವವ ಕಲಿಸುವ
ಗುರುವು ಇವನು ನಿತ್ಯ ವಂದ್ಯನಾಗಿಹ.
ಜಗಕೆ ಜ್ಞಾನ ಹಂಚುತಾ ತನ್ನೇ ತಾನು ಮರೆಯುವ
ಕೋಟಿ ಕೋಟಿ ದೇವರ ಇವನು ತಾನು ತೋರಿದ,
ಜಗಕೆ ಬದುಕ ದಾರಿಯ ತೋರುತ
ಸ್ವತಃ ದೇವರುಗಳಿಂದಲೇ ಪೂಜನೀಯನಾಗಿಹ.