26 March, 2020

ಆತ್ಮ ಮಂಥನ...

ಮಂದಿರ ಮಸೀದಿ ಚರ್ಚುಗಳು
ಬಾಗಿಲು ನಿನಗೆ ಮುಚ್ಚಿದವೋ,
ಈಗಲಾದರೂ ಮನಸಿನ ಬಾಗಿಲು ತೆರೆ
ಈಶ್ವರ ಅಲ್ಲಾ ಯೇಸು ಅಲ್ಲಿ ನಿಂತಿಹರಲ್ಲೋ...

ಭುವಿಯೆಂಬ ಸ್ವರ್ಗವ ಮರೆಮಾಚಿ
ಮೇಲಿನ ಸ್ವರ್ಗವ ನೀ ಹುಡುಕುತಿರೆ,
ನಿನ್ನಯ ರೂಪದೆ ನಿಂತಿಹನು
ನೀನು ನಂಬಿರುವಾ ಆ ಭಗವಂತ...

ಕಾಲದ ಈ ಓಟದಲಿ
ನೀನೀಗ ಇಲ್ಲಿ ಬಂಧಿಯೂ,
ಅರಿತು ನೀನೀಗ ನಡೆದರೆ
ನಾಳೆಯ ದಾರಿ ಕಾಣುವುದು...

ಅಹಂಕಾರಕೇ ಇಲ್ಲಿ ನೀನೇ ನೀರು ಕುಡಿ
ಬೇರೆ ಔಷದಿ ಇಲ್ಲಿ ಇಲ್ಲಾ ನೋಡು,
ನಾಳೆಯ ಬೆಳಗು ನೀ ನೋಡಲು
ಅಹಮ್ಮಿನ ಪೊರೆಯಾ ಸರಿಸಿ ಬಿಡು...

ಕಾಲವ ಕೆಣಕುತ ನೀ ನಡೆದರೆ
ಕಾಲನೇ ಉತ್ತರಿಸುವಾ ನೋಡು ಬಾ,
ಪ್ರಕೃತಿಯಾ ನೀ ಅವಮಾನಿಸಿ
ಬದುಕೋದೆಲ್ಲೋ ಓ ಮನುಜಾ...

15 March, 2020

ಹೂವು...

ಬಾಳಬೇಕು ಬದುಕ ಇಲ್ಲಿ ಹೂವಿನ ತರಹ
ನೋವು ಇಲ್ಲ ಅಲ್ಲಿ ನಗುವು ಮಾತ್ರ ಇಲ್ಲಿ,
ದೇವರ ಮುಡಿಗೂ ಸ್ಮಶಾನದ ಹೆಣಕೋ
ದಿನದ ಬದುಕ ನೆನೆದು ಕೊರಗೂ ಇಲ್ಲ ಇಲ್ಲಿ...

ಮೇಲು ಕೀಳು ಇಲ್ಲಾ ಇಲ್ಲಿ
ಸುವಾಸನೆಯ ಹಂಗಂತೂ ಮೊದಲೇ ಇಲ್ಲಾ,
ಅರಳಿ ನಗುವುದಷ್ಟೇ ಕೆಲಸ
ದಿನದ ಕಡೆಯವರೆಗೂ ಇಲ್ಲಾ ಇಲ್ಲಿ ಚಿಂತೆ...

ಅಂದ ಚಂದಕಿಲ್ಲಿ ಜಂಭವೇನು ಇಲ್ಲಾ
ಮುದ್ದಾದ ನಗುವ ತುಂಬಾ ಕನಸುಗಳೇ ಇಲ್ಲಿ,
ನೂರಾರು ಬಣ್ಣ ಬಿನ್ನಾಣವಿದ್ದರೂನು
ಅಹಂಮ್ಮಿನ ಕೇಕೇಯಂತೂ ಇಲ್ಲಾ...

ಮೊಗ್ಗಾಗಿ ಮೂಡಿ ಹೂವಾಗಿ ಅರಳಿ
ಬಾಡಿ ಉದುರಿ ಹೋದರೂ ಇಲ್ಲಿ,
ಬರೀಯ ಪ್ರೀತಿಯ ಹಂಚಿ ನಗುತಾ
ಬಾಳೋದಷ್ಟೇ ಬದುಕು ಇಲ್ಲಿ...