13 June, 2021

ಮಾಯಗನ್ನಡಿ...

ಹಗಲು ಜಾರಿ ಇರುಳು ಏರಿದಂತೆ
ಮನಸು ಈಗ ಮಾಯೆಯೊಳು ಬಂಧಿ,
ಬೆಳಕು ಕರಗಿ ಅಂಧಕಾರದೊಳು ಜಾರಿದಂತೆ
ಮನಸು ಇಲ್ಲಿ ಮೌನದಲೇ ಕರಗಿಹೋಗಿದೆ...

ಸಮಯದ ಚಕ್ರ ಉರುಳಿ ಸಾಗುತಿರಲು
ಮನೋ ರಥವು ಯಾಕೋ ನಿಂತು ಸಾಗಿದೆ,
ಗುರುವಿಲ್ಲದ ಗಮ್ಯ ಗುರಿಯಿರದಾ ಪಯಣ
ಮನಸೆಲ್ಲೋ ಈಗ ಮರೆಯಾಗಿದೆ...

ಮೆರೆಸೋದು ಕಾಲ ಮರೆಸೋದು ಕಾಲ
ಮತ್ತೆಲ್ಲಾ ಶೂನ್ಯ ಈ ಜಗದೊಳಗೇ,
ಮನಸೀಗ ಮೌನಿ ಎದೆಯ ನೂರು ಭಾವಕೇ
ತುಸು ಹನಿಯ ಸಿಂಚನ ಸಿಗಲಾರದೇ...

ಪ್ರತಿ ಕ್ಷಣವು ಮರಣ ಮರು ಗಳಿಗೆ ಜನನ
ಇದು ಮನಸಿನ ನಿತ್ಯ ನಿರಂತರ ಯಾತ್ರೆಯೂ,
ಮೂರು ಗುಣಗಳ ಜೊತೆಗೆ ನೂರು ಮುಖಗಳ ಹೊತ್ತು
ಮಾಯೆಯೊಳಗೊಂದು ಮಾಯೆಯ ಹುಡುಕುವುದೇ ಮನಸು...

No comments:

Post a Comment