ಇರುವುದು ಒಂದೇ ಮನುಷ್ಯ ಜನ್ಮ
ಬಾಳಿ ಬದುಕಬೇಕಿಲ್ಲಿ,
ಅವನ ಕರೆ ಬಂದಾಗ ಎಲ್ಲವ ಬಿಟ್ಟು
ಹೊರಟು ಹೋಗಬೇಕಲ್ಲಿ...
ಅಲ್ಲಿರುವುದು ನಮ್ಮಯ ಮನೆಯೂ
ಇಲ್ಲಿರುವುದು ನಾವು ಸುಮ್ಮನೆಯೂ,
ಈ ಲೋಕದ ಋಣವು ಮುಗಿಯುತಿರಲು
ಹಿಂತಿರುಗಿ ಹೋಗಲೇಬೇಕಲ್ಲಿ...
ನಾಳೆಯ ಚಿಂತೆಯು ನಮಗಿಲ್ಲಿ
ಅವನ ಲೆಕ್ಕಾಚಾರವೇ ಮೊದಲಿಲ್ಲಿ,
ಅರಳೋ ಹೂವು ಬಾಡುವ ಮುನ್ನ
ಅವನು ಆಟವನೇ ಮುಗಿಸುವಾ...
ನಗುವಿಗೆ ಕಾರಣ ಏನಿಲ್ಲಾ
ನೋವಿಗೆ ಚಿಂತೆಯು ಬೇಕಿಲ್ಲಾ,
ಕಾಲನು ಆಡೋ ಆಟದಲಿ
ಕೈ ಗೊಂಬೆಗಳೇ ನಾವೆಲ್ಲಾ...