13 September, 2012

ಕಟ್ಟಬೇಕಿದೆ ಬದುಕು...



ನೂರು ನಿರೀಕ್ಷೆಗಳ ದಾರಿಯಲಿ ಸಾಗಿದೆ ಜೀವನ,
ಅನುರತವು ನಡೆದಿದೆ ಕನಸುಗಳ ಸಮ್ಮೇಳನ,
ನೂರು ಏಟಿನ ಕಹಿನೆನಪುಗಳ ಜೊತೆಗೆ,

ಮಾಡಿದೆ ಮನಸನು ಹೊಸಕ್ರಾಂತಿಗೆ ಪ್ರೇರಣೆ.

ಯಾವುದೋ ಸ್ವಾಭಿಮಾನಕೆ ಕಿಡಿಯಾಗಿದೆ ಮನಸು,
ಹೊತ್ತಿ ಉರಿಯುತಿದೆ ಅಲ್ಲಿ ಕನಸಿನರಮನೆ,
ಬದುಕ ಕಟ್ಟುವ ತವಕ ಮುನ್ನಡಿಸಿದೆ ಕೈ ಹಿಡಿದು,
ನಾಳೆಗಳ ಹೊಸ ಬದುಕಿನ ಆಶಯವ ಹೊತ್ತು.

ಮರಗಟ್ಟಿದ ಮನಸು ಎಚ್ಚೆತ್ತಿದೆ ಇಲ್ಲಿ,
ಹೊಸ ಹುರುಪಿನ ಚೈತನ್ಯ ದೊರೆತಿದೆ ಮನಸಿಗೆ,
ಕನಸುಗಳ ಸಾಕಾರಗೊಳಿಸುವ ಮಂತ್ರವಿದೆ ಮನದಲ್ಲಿ,
ಹೇಳಿಕೊಟ್ಟಿದೆ ಬದುಕು ಎದ್ದು ನಿಲ್ಲುವ ಪಾಠ.

ಕಾದ ಕುಲುಮೆಯೊಳಗಿನ ಕಬ್ಬಿಣವು ಮನಸು,
ತಟ್ಟಬೇಕಿದೆ ಅದನು ತಣ್ಣಗಾಗುವ ಮೊದಲು,
ತುಂಬುತಿಹುದಿಲ್ಲಿ ಹೊಸ ಕನಸಿಗೆ ಆಕಾರ,
ಕಟ್ಟಬೇಕಿದೆ ಬದುಕ ನಾಳೆಗಳ ನಾಳೆಗೆ.

No comments:

Post a Comment