ಭಾರತ ಮಾತೆಯ ಓ ಮುದ್ದು ಕುವರ,
ಭರತನಾಳಿದ ಭುವಿಯ ಸತ್ಪ್ರಜೆಯಾಗು ನೀನು.
ನೂರು ಭಾಷೆಗಳ,ನೂರು ಜಾತಿಗಳ ತವರು ನಿನ್ನದು,
ಭೇಧಭಾವವ ಮರೆಸೋ ಐಕ್ಯ ಮಂತ್ರವ ಹಾಡಬೇಕಿದೆ ನೀನು.
ಜಗಕೆ ಶಾಂತಿಯಧಾಮವೀ ಭಾರತ,
ಮೆರೆಸಬೇಕಿದೆ ಇಲ್ಲಿ ಸಮರಸದ ಸಮನ್ವಯತೆಯ.
ಸನಾತನ ಸಂಸ್ಕೃತಿಯ ನೆಲೆಬೀಡು ಭಾರತ,
ನೀನಾಗಬೇಕಿದೆ ಸಂಸ್ಕೃತಿಯ ಬೆಳಗುವಾ ನಾಯಕ.
ರಾಮನಾಳಿದ ಭೂಮಿ,ಕೃಷ್ಣನಾಡಿದ ಧರೆಯಿದುವೇ,
ರಾಮನ ನಡತೆ,ಕೃಷ್ಣನಾ ನೀತಿ ನಿನ್ನದಾಗಲಿ ಓ ಮುದ್ದು ಹುಡುಗ.
ಕುಹಕಿಗಳ ನೂರು ತಂತ್ರವಿಹುದಿಲ್ಲಿ,ಮೋಸದ ರಣತಂತ್ರವಿಹುದಿಲ್ಲಿ,
ಮೋಸದ ಜಾಲವ ಸುಡಬೇಕಿದೆ ನೀನಿಂದು ಕ್ರಾಂತಿಯ ಕಿಡಿಯಿಂದ.
ಭ್ರಷ್ಟರಾ ಹಿಂಡು ಮೆರೆದಿಹುದು ಇಲ್ಲಿ,
ಭ್ರಷ್ಟತೆಯ ತೊಲಗಿಸೊ ವೀರಸೇನಾನಿ ನೀನಾಗು .
ಜಗವೇ ಎದುರಾದರೂ ಅಳುಕದಿರು ನೀನು,
ಭರತಮಾತೆಯ ಹೆಸರುಳಿಸೋ ಕ್ರಾಂತಿಗುರುವಾಗು ಓ ಮುದ್ದು ಹುಡುಗ...
ಭೇಧಭಾವವ ಮರೆಸೋ ಐಕ್ಯ ಮಂತ್ರವ ಹಾಡಬೇಕಿದೆ ನೀನು.
ಜಗಕೆ ಶಾಂತಿಯಧಾಮವೀ ಭಾರತ,
ಮೆರೆಸಬೇಕಿದೆ ಇಲ್ಲಿ ಸಮರಸದ ಸಮನ್ವಯತೆಯ.
ಸನಾತನ ಸಂಸ್ಕೃತಿಯ ನೆಲೆಬೀಡು ಭಾರತ,
ನೀನಾಗಬೇಕಿದೆ ಸಂಸ್ಕೃತಿಯ ಬೆಳಗುವಾ ನಾಯಕ.
ರಾಮನಾಳಿದ ಭೂಮಿ,ಕೃಷ್ಣನಾಡಿದ ಧರೆಯಿದುವೇ,
ರಾಮನ ನಡತೆ,ಕೃಷ್ಣನಾ ನೀತಿ ನಿನ್ನದಾಗಲಿ ಓ ಮುದ್ದು ಹುಡುಗ.
ಕುಹಕಿಗಳ ನೂರು ತಂತ್ರವಿಹುದಿಲ್ಲಿ,ಮೋಸದ ರಣತಂತ್ರವಿಹುದಿಲ್ಲಿ,
ಮೋಸದ ಜಾಲವ ಸುಡಬೇಕಿದೆ ನೀನಿಂದು ಕ್ರಾಂತಿಯ ಕಿಡಿಯಿಂದ.
ಭ್ರಷ್ಟರಾ ಹಿಂಡು ಮೆರೆದಿಹುದು ಇಲ್ಲಿ,
ಭ್ರಷ್ಟತೆಯ ತೊಲಗಿಸೊ ವೀರಸೇನಾನಿ ನೀನಾಗು .
ಜಗವೇ ಎದುರಾದರೂ ಅಳುಕದಿರು ನೀನು,
ಭರತಮಾತೆಯ ಹೆಸರುಳಿಸೋ ಕ್ರಾಂತಿಗುರುವಾಗು ಓ ಮುದ್ದು ಹುಡುಗ...
No comments:
Post a Comment