ಮನದ ಶರಧಿಯೊಳಗೊಂದು ಅಮೃತ ಮಂಥನ,
ಚಿಂತನೆಯ ಮಾಡಬೇಕಿದೆ ಮೇರುಪರ್ವತ,
ಕಡೆವ ಹಗ್ಗವಾಗಲಿ ನಮ್ಮೊಳಗಿನ ಅಹಂಕಾರವೂ.
ಮನದೊಳಗಿನ ಅಸೂಯೆ,ಕ್ರೋಧಗಳೇ ಅಸುರರಾಗಲಿ,
ವಿವೇಕ,ಶಾಂತತೆಯೇ ಸುರರಾಗಲಿ,
ನಂಜುಂಡರಾಗಬೇಕಿದೆ ನೋವೆಂಬ ವಿಷವ ಕುಡಿದು.
ಪಡೆಯಬೇಕಿದೆ ಜ್ಞಾನದ ಕಾಮಧೇನುವ,
ಪಡೆಯಬೇಕಿದೆ ಶಾಂತಿ,ಸಂಮೃದ್ಧಿಯ ಕಲ್ಪವೃಕ್ಷವ,
ಉಕ್ಕಿ ಹರಿಯಲಿ ಅಲ್ಲಿ ನಿತ್ಯ ಸುಖ,ನೆಮ್ಮದಿಯ ಅಮೃತವೂ.
ಮನದ ಶರಧಿಯು ಶುಚಿಯಾಗಲಿ ಭಾವ ಮಂಥನಕೆ,
ನಡೆಯಲೊಂದು ಅಮೃತ ಮಂಥನ ಏಕಾಗ್ರತೆಯ ಬೆಳಗಿ ಬಾಳ ಹಸಿರಾಗಿಸಲು,
ನಡೆಯಲೊಂದು ಭಾವ ಮಂಥನ ನಿತ್ಯ ಜೀವನ ಪ್ರೀತಿಗೆ.
No comments:
Post a Comment