ನಗುವ ಓ ಹೂವುಗಳೇ
ಉದಯ ರವಿಯ ಕಿರಣಗಳೇ,
ಕರಗದಿರಿ ನಾಳೆಯಲಿ
ಓ ಭರವಸೆಯ ಹನಿಗಳೇ.
ಭವಿಷ್ಯದ ಓ ತಾರೆಗಳೇ
ಅಳುಕದಿರಿ ನಾಳೆಯ ಬದುಕಿಗೆ,
ಬದುಕದಿರಿ ಚಿಂತೆಯ ನೆರಳಲಿ
ನಾಳೆಯಿರುವುದು ನಿಮಗಾಗೇ.
ಕಲ್ಲು ಮುಳ್ಳಿನ ಹಾಸಿಗೆಯೂ
ನೀವು ನಡೆಯುವ ದಾರಿಯಿದು,
ಹೆಜ್ಜೆಯನೆಂದೂ ಮರೆಯದಿರಿ
ನೋವು ನಲಿವಿನ ಪಯಣದಲಿ.
ಸಹಸ್ರ ಸಹಸ್ರ ಕೈಗಳಿವೆ
ನಿಮ್ಮ ಕನಸ ಕದಿಯೋಕೆ,
ಕುಗ್ಗದಿರಿ ನೀವೆಂದೂ
ರಾಗ ದ್ವೇಷಕೆ ಬಲಿಯಾಗಿ.
ಪುಣ್ಯ ಭೂಮಿಯ ಕೂಸುಗಳೇ
ಸಂಸ್ಕೃತಿ ರಕ್ಷಣೆ ನಿಮ್ಮ ಹೊಣೆ,
ಕರಗದಿರಲಿ ಈ ನಗುವು
ಜೀವನ ಪಯಣದ ಹೆಜ್ಜೆಯಲಿ.
ಭರತ ಭೂಮಿಯ ರತ್ನಗಳೇ
ಶಾಂತಿ ತೋಟದ ಹೂವಾಗಿ,
ಕಿಚ್ಚಿನ ಓ ಸಿಂಹಗಳೇ
ಕ್ರಾಂತಿಯ ಕಿಡಿ ನೀವಾಗಿ...
ಅಳುಕದಿರಿ ನಾಳೆಯ ಬದುಕಿಗೆ,
ಬದುಕದಿರಿ ಚಿಂತೆಯ ನೆರಳಲಿ
ನಾಳೆಯಿರುವುದು ನಿಮಗಾಗೇ.
ಕಲ್ಲು ಮುಳ್ಳಿನ ಹಾಸಿಗೆಯೂ
ನೀವು ನಡೆಯುವ ದಾರಿಯಿದು,
ಹೆಜ್ಜೆಯನೆಂದೂ ಮರೆಯದಿರಿ
ನೋವು ನಲಿವಿನ ಪಯಣದಲಿ.
ಸಹಸ್ರ ಸಹಸ್ರ ಕೈಗಳಿವೆ
ನಿಮ್ಮ ಕನಸ ಕದಿಯೋಕೆ,
ಕುಗ್ಗದಿರಿ ನೀವೆಂದೂ
ರಾಗ ದ್ವೇಷಕೆ ಬಲಿಯಾಗಿ.
ಪುಣ್ಯ ಭೂಮಿಯ ಕೂಸುಗಳೇ
ಸಂಸ್ಕೃತಿ ರಕ್ಷಣೆ ನಿಮ್ಮ ಹೊಣೆ,
ಕರಗದಿರಲಿ ಈ ನಗುವು
ಜೀವನ ಪಯಣದ ಹೆಜ್ಜೆಯಲಿ.
ಭರತ ಭೂಮಿಯ ರತ್ನಗಳೇ
ಶಾಂತಿ ತೋಟದ ಹೂವಾಗಿ,
ಕಿಚ್ಚಿನ ಓ ಸಿಂಹಗಳೇ
ಕ್ರಾಂತಿಯ ಕಿಡಿ ನೀವಾಗಿ...
"ಸಹಸ್ರ ಸಹಸ್ರ ಕೈಗಳಿವೆ
ReplyDeleteನಿಮ್ಮ ಕನಸ ಕದಿಯೋಕೆ" ಏನೂತಲೇ ಎಚ್ಚರಿಸಿ
"ಕಿಚ್ಚಿನ ಓ ಸಿಂಹಗಳೇ
ಕ್ರಾಂತಿಯ ಕಿಡಿ ನೀವಾಗಿ... " ಹುರಿದುಂಬಿಸುವ ಕವನ ನೆಚ್ಚಿಗೆಯಾಯಿತು.
http://badari-poems.blogspot.in/
Thank u sir
ReplyDelete