ಉದಯ ಸೂರ್ಯನಲ್ಲ,
ಭರವಸೆ ಅನ್ನೋದು ಇಲ್ಲಿ
ಪಶ್ಚಿಮದ ಕಡಲೂ ಅಲ್ಲ...
ಕನಸು ಕಾಣುವ ಜೀವಕೆ
ಬದುಕುವುದೇ ಒಂದು ಸಂಭ್ರಮ,
ನಗುವ ಮನಸಿರೋ ಜೀವಕೆ
ಬದುಕು ಅನ್ನೋದು ಹಬ್ಬವೇ...
ಮರುಗಬೇಕು ಮರೆವಿನೊಳು
ಅರಳಬೇಕು ಲೋಕದೊಳಗೆ,
ಜೀಕಬೇಕು ಕಾಲದ ಉಯ್ಯಾಲೆಯಲಿ
ಎದೆಯ ತುಂಬಿದ ಭಾವದ ಜೊತೆಗೆ...
ಕರಗಬೇಕು ಬದುಕು ಪ್ರೀತಿಯಾಗಲು
ಕಾಯಬೇಕು ಮನಸು ಹದವಾಗಲೂ,
ಬದುಕು ಇಲ್ಲಿ ಕೇಳಿ ಪಡೆದ ವರವಲ್ಲ
ಕರ್ಮದ ಜೊತೆಗಿನ ಶಾಪವೂ ಅಲ್ಲ...
No comments:
Post a Comment