ಅಳಿಸಲಾಗದ ಕಲೆಯು ಮೂಡಿಹುದು,
ಬದುಕೆಂಬ ಕಥೆಯಲ್ಲಿ ನೋವೇ ತುಂಬಿಹುದು
ಜೀವ ಒದ್ದಾಡಿದೆ ಭಗವಂತ ಕಾಲದ ಏಟಿಗೆ...
ಹುಟ್ಟಿಲ್ಲಿ ಉಚಿತ ಲೋಕದ ಸೃಷ್ಟಿಯಲಿ
ಸಾವೆಂಬುದು ನಿತ್ಯ ಸತ್ಯವೆಂದಿಗೂ,
ಬಂದ ಮೇಲೆ ಹೊರಡಲೇಬೇಕು
ಬಂಧ ಕಳಚಿ ಬಿಟ್ಟು ಹೋಗಲೇಬೇಕಿಲ್ಲಿ...
ಮೂರುದಿನದ ಯಾತ್ರೆಯಲಿ
ನೂರು ನೂರು ಕನಸುಗಳು,
ಭಗವಂತ ನಿನಗೆ ಕರುಣೆ ಇಲ್ಲವೇ
ಕೆಲಸ ಮುಗಿಸೋಕೆ ಸಮಯ ನೀಡಬಾರದೇ...
ಅಳುವಿನ ಹಿಂದೆ ನಗುವ ಬಚ್ಚಿಟ್ಟೆ
ನಗುವ ಮುಂಚೆಯೇ ಕಣ್ಣ ಮುಚ್ಚಿಬಿಟ್ಟೆ,
ವಿಧಿಯೆಂಬ ಮಹರಾಯ ನಿನ್ನ ಆಟಕೆ
ನಿಯಮಗಳ ಸ್ವಲ್ಪ ಹೇಳಬಾರದೇ...
No comments:
Post a Comment