05 September, 2014

**ಗುರುಭ್ಯೋನಮಃ**



ಜ್ಞಾನದ ಜ್ಯೋತಿಯ ಆಗರವೇ
ವಿನಯಕೆ ನೀನೇ ಸಾಗರವೂ,
ತ್ರಿಮೂರ್ತಿ ರೂಪೇ ಗುರುದೇವಾ
ನಿನ್ನಯ ಚರಣಕಮಲಗಳಿಗಿದೋ ನಮನ.

ಬುದ್ಧಿಯ ತಿದ್ದಿದ ಕಲೆಗಾರ
ವಿಧೇಯತೆ ಬೆಳೆಸಿದ ಗೆಣೆಕಾರ,
ಗುರಿಯನು ತೋರಿದ ನಾಯಕನೇ
ನಮೋ ನಮೋ ಓ ಗುರುದೇವಾ.

ಕಿಚ್ಚಿನ ಕಿಡಿಯನು ಹೊತ್ತಿಸಿದೆ
ಅರಿವಿನ ದೀಪವ ಬೆಳಗಿಸಿದೆ,
ಮಮತೆಯಿಂದಲೇ ನೀ ಹರಸಿದೆ
ನಮಿಸುವೆ ನಿನಗೆ ಓ ಆಚಾರ್ಯ.

ಮಣ್ಣಿನ ಮುದ್ದೆಯ ಮೂರ್ತಿಯಾಗಿಸಿದೆ
ಚೈತನ್ಯವ ತುಂಬಿದೆ ಜೀವನಕೆ,
ನಿಜ ಭಕ್ತಿಯ ಭಾವವ ಮೂಡಿಸಿದಾ
ಶ್ರೀಗುರುವೇ ನಿನಗೆ ವಂದಿಪೆನು.

ಜೀವನ ಪಾಠವ ಭೋಧಿಸಿದೆ
ಪ್ರೀತಿಯಲೇ ಜಗವ ತೋರಿಸಿದೆ,
ಮನುಕುಲ ಬೆಳಗುವ ಸದ್ಗುಣಧಾಮ
ನಮಿಪೆನು ನಿನಗೆ ಓ ಗುರುದೇವಾ.

2 comments:

  1. ’ಮಣ್ಣಿನ ಮುದ್ದೆಯ ಮೂರ್ತಿಯಾಗಿಸಿದೆ’ ಎನ್ನುವುದು ನನ್ನಂತಹವರ ಮಟ್ಟಿಗೆ ಸರಿಯಾದ ವಿಶ್ಲೇಷಣೆ.

    ReplyDelete