27 May, 2024

ಸಂಘರ್ಷ...

ಕಾಡುವಾ ಬದುಕ ಬನದಿ ನೂರು ಸುಳ್ಳಿದೆ
ಕಳೆದುಕೊಳ್ಳುವಾ ಭಯವು ಮಾತ್ರ ಸತ್ಯವಾಗಿದೆ,
ಬದುಕು ಇಲ್ಲಿ ಸತ್ಯ ಸುಳ್ಳಿನ ತಂತಿ ಮೇಲಿದೆ
ಆ ತಂತಿಯಾ ಮೀಟಲೂ ಜೀವ ಹೆದರಿದೆ...

ಧರ್ಮದ ಮಡಿಲಿನಲ್ಲಿ ಸತ್ಯ ಮಲಗಿರೆ
ಅಧರ್ಮದ ಹೆಗಲ ಮೇಲೆ ಸುಳ್ಳು ಮೆರೆದಿದೆ,
ಲೋಕವೂ ಸತ್ಯಕೆ ಪರೀಕ್ಷೆಯೊಡ್ಡಲೂ
ಸುಳ್ಳು ತಾನು ನಗುತಾ ಯಾತ್ರೆ ಮಾಡಿದೆ...

ಬದುಕಿನೊಳಗೆ ಸತ್ಯದಾ ಜಾತ್ರೆ ನಡೆಯದು
ಸತ್ಯದಾ ಭಾರವನ್ನು ಹೊರದು ಲೋಕವೆಂದಿಗೂ,
ಸುಳ್ಳಿಗೆ ಎಂದೂ ಇಲ್ಲಿ ಪೂಜೆ ಸಿಗುವುದೂ
ಜಗವೂ ಎಂದೂ ಬಣ್ಣದ ಮುಖವಾಡ ನಂಬೋದು...

ನೂರು ಬಾರಿ ಸೋತರೂ ಜಗದ ಜಗಲಿಯಲಿ
ಸತ್ಯವೆಂದಿಗೂ ತಲೆ ಎತ್ತಿ ನಿಲುವುದೂ,
ನೂರು ಬಾರಿ ಗೆದ್ದರೂ ಸುಳ್ಳು ಜಗದಲಿ
ತಲೆ ಬಾಗಿಸಿ ನಡೆಯಬೇಕು ಕಾಲದೊಂದಿಗೆ...

No comments:

Post a Comment