ಬರಿದೇ ಬರವಣಿಗೆ ಅಲ್ಲಾ
ಇದು ಭಾವದ ಮೆರವಣಿಗೆ,
ಸ್ವಲ್ಪ ಕಹಿ ನೋವು
ಮತ್ತೆಲ್ಲಾ ಸಿಹಿ ಜೇನು...
ಬರೆಯ ಕನಸುಗಳೇ ಇಲ್ಲಿ
ಕೆಲವಂತೂ ಬರೆ ಎಳೆದ ನೆನಪುಗಳೇ,
ನೆನಪುಗಳ ಮೆರವಣಿಗೆ ಅಲ್ಲಾ
ಇದು ಹೃದಯಕ್ಕೆ ಕಚಗುಳಿಯೂ...
ನೋವಿಲ್ಲಿ ನಗುವಾಯ್ತು
ನಗುವೊಂದೇ ಕನಸಾಯ್ತು,
ಕಣ್ಣೀರಿಗೆ ಕಸ ಕಾರಣವಿಲ್ಲಿ
ಬದುಕೆಂಬ ಮೂರು ದಿನದ ಜಾತ್ರೆಯೊಳಗೆ...
ಹೃದಯಕ್ಕೆ ನಾಟಲೇ ಇಲ್ಲ
ಮನಸಿನ ಗಾಯದ ನೋವು,
ಬದುಕಿಲ್ಲಿ ನಾಟಕವಂತೆ
ಜಗವೆಂಬೊ ರಂಗಮಂದಿರದೊಳಗೆ...
ಹುಟ್ಟೊದೇ ಅಳುವಿನ ಜೊತೆಗೆ
ನಡುವೆ ನಗುವ ಹುಡುಕಬೇಕಿಲ್ಲಿ,
ಹುಡುಕಾಟ ಮುಗಿಸೋವಾಗ
ಸಾವೆಂಬ ಜವರಾಯ ಅಳುವ ಕರುಣಿಸುವ...
ಇದು ಭಾವದ ಮೆರವಣಿಗೆ,
ಸ್ವಲ್ಪ ಕಹಿ ನೋವು
ಮತ್ತೆಲ್ಲಾ ಸಿಹಿ ಜೇನು...
ಬರೆಯ ಕನಸುಗಳೇ ಇಲ್ಲಿ
ಕೆಲವಂತೂ ಬರೆ ಎಳೆದ ನೆನಪುಗಳೇ,
ನೆನಪುಗಳ ಮೆರವಣಿಗೆ ಅಲ್ಲಾ
ಇದು ಹೃದಯಕ್ಕೆ ಕಚಗುಳಿಯೂ...
ನೋವಿಲ್ಲಿ ನಗುವಾಯ್ತು
ನಗುವೊಂದೇ ಕನಸಾಯ್ತು,
ಕಣ್ಣೀರಿಗೆ ಕಸ ಕಾರಣವಿಲ್ಲಿ
ಬದುಕೆಂಬ ಮೂರು ದಿನದ ಜಾತ್ರೆಯೊಳಗೆ...
ಹೃದಯಕ್ಕೆ ನಾಟಲೇ ಇಲ್ಲ
ಮನಸಿನ ಗಾಯದ ನೋವು,
ಬದುಕಿಲ್ಲಿ ನಾಟಕವಂತೆ
ಜಗವೆಂಬೊ ರಂಗಮಂದಿರದೊಳಗೆ...
ಹುಟ್ಟೊದೇ ಅಳುವಿನ ಜೊತೆಗೆ
ನಡುವೆ ನಗುವ ಹುಡುಕಬೇಕಿಲ್ಲಿ,
ಹುಡುಕಾಟ ಮುಗಿಸೋವಾಗ
ಸಾವೆಂಬ ಜವರಾಯ ಅಳುವ ಕರುಣಿಸುವ...